Uncategorized

‘ಕುವೆಂಪು ದೀಪ’ ಪ್ರಶಸ್ತಿಗೆ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರನ್ನು ಆಯ್ಕೆ

ಹೊನ್ನಾವರ: ಹೊನ್ನಾವರದ ಜಾನಪದ ವಿಶ್ವ ಪ್ರತಿಷ್ಠಾನ ನೀಡುವ 2023ನೇ ಸಾಲಿನ ‘ಕುವೆಂಪು ದೀಪ’ ಪ್ರಶಸ್ತಿಗೆ ಬಹುಮುಖಿ ಚಿಂತಕಲೇಖಕವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಜಾನಪದ ವಿಶ್ವ ಪ್ರತಿಷ್ಠಾನ 40 ವರ್ಷಗಳಿಂದ ಜಾನಪದ ದೀಪಾರಾಧನೆ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಜೊತೆಗೆ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಜನಾನುರಾಗಿ ಸೇವಾನಿರತರಿಗೆ ಪ್ರಶಸ್ತಿಗಳನ್ನು ನೀಡುತ್ತ ಬಂದಿದೆ.

ಕಾರಂತ ದೀಪ ಪ್ರಶಸ್ತಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಡೀನ್ ಸಿ. ನಾಗಭೂಷಣ ಹಾಗೂ ಕಲಾದೀಪ ಪ್ರಶಸ್ತಿ’ಗೆ ಕಲಾವಿದ ಎಚ್. ಎನ್. ಸುರೇಶ್, ‘ದೇವಮ್ಮ ರಾಮನಾಯಕ ದೀಪ ಪ್ರಶಸ್ತಿ’ಗೆ ಅಂಕೋಲದ ಕಮ್ಮಾರ ಚಂದ್ರಕಾಂತ ಮುಕುಂದ ಆಚಾರಿ, ‘ವಿದ್ಯಾರ್ಥಿ ದೀಪ ಪ್ರಶಸ್ತಿಗೆ ಯೋಗಪಟು ಶ್ರೀನಿಧಿ ಪ್ರಕಾಶ್ ಗೌಡ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ 6,000 ನಗದು ಮತ್ತು ಸ್ಮರಣಿಕೆಯನ್ನೊಳಗೊಂಡಿದೆ.

ಎನ್. ಆರ್. ನಾಯಕನಾಗರಾಜಹೆಗಡೆ ಅಪಗಾಲಅಭಿನವ ರವಿಕುಮಾರ್ ಮತ್ತು ಸಂಧ್ಯಾ ಹೆಗಡೆ ದೊಡ್ಡಹೊಂಡ ಆಯ್ಕೆ ಸಮಿತಿಯಲ್ಲಿದ್ದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವು 2023 ಸೆಪ್ಟೆಂಬರ್‌ 5 ಮಂಗಳವಾರದಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿನ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಭಾರತ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಎನ್. ಸಂತೋಷ ಹೆಗ್ಡೆ ಉದ್ಘಾಟಿಸಲಿದ್ದಾರೆ. ಎನ್.ಆರ್. ನಾಯಕ ಮತ್ತು ಶಾಂತಿ ನಾಯಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಎನ್. ಆರ್. ನಾಯಕ್ ಅವರ ಬದುಕು ಮಹಾಕಾವ್ಯದ ಗೀತೆಗಳನ್ನು ಎಂ. ಡಿ. ಪಲ್ಲವಿ ಪ್ರಸ್ತುತಪಡಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಅಭಿನವ ಮತ್ತು ಜಾನಪದ ಪ್ರಕಾಶನ ಪ್ರಕಟಿಸಿರುವ ‘ಮಕ್ಕಳೇ ದೇವರು’ (ಎನ್. ಆರ್. ನಾಯಕರ ಆಯ್ದ ಮಕ್ಕಳ ಕವಿತೆಗಳು) ಸಂ: ಆನಂದ ಪಾಟೀಲ. ಎನ್. ಆರ್. ನಾಯಕರ ಕಾವ್ಯದ ಛಂದೋವಿನ್ಯಾಸ ಒಂದ ನೋಟ: ಪ್ರೊ.ಆರ್. ಎಸ್. ನಾಯಕಮುಖ್ಯಸ್ಥರುಕನ್ನಡ ವಿಭಾಗಅಂಜುಮಾನ್ ಕಾಲೇಜು ಭಟ್ಕಳಉ. ಕ. ಕೃತಿಗಳನ್ನು ಗಾಯಕಿ ಎಂ. ಡಿ. ಪಲ್ಲವಿ ಸಂಗೀತ ಸಂಯೋಜಿಸಿರುವ ಕಾದಲರು‘ ನಾಯಕರ ಬದುಕು ಮಹಾಕಾವ್ಯದ ಗೀತೆಗಳು) ಧ್ವನಿಸಾಂದ್ರಿಕೆಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Ghantepatrike kannada daily news Paper

Leave a Reply

error: Content is protected !!