ರಾಜ್ಯ

2022ನೇ ಸಾಲಿನ ‘ಸರಳಾ ರಂಗನಾಥರಾವ್‌ ಪ್ರಶಸ್ತಿ’ಗಾಗಿ ಕೃತಿಗಳ ಆಹ್ವಾನ

ಬೆಂಗಳೂರು: ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನವು ‘2022ನೇ ಸಾಲಿನ ಸರಳಾ ರಂಗನಾಥ ರಾವ್‌ ಪ್ರಶಸ್ತಿಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಿದೆ.

ಕೃತಿಗಳು ಆತ್ಮಚರಿತ್ರೆ/ ಜೀವನ ಚರಿತ್ರೆ ಸಾಹಿತ್ಯ ಪ್ರಕಾರಕ್ಕೆ ಸೇರಿರಬೇಕು. ಈ ಕೃತಿಗಳು 2022ರ ಜನವರಿಯಿಂದ ಡಿಸೆಂಬರ್ ಒಳಗೆ ಪ್ರಕಟವಾಗಿರಬೇಕು. ಇದು ಲೇಖಕಿಯರಿಗೆ ಸೀಮಿತವಾದ ಪ್ರಶಸ್ತಿಯಾಗಿದ್ದುಆಸಕ್ತ ಲೇಖಕಿಯರು ತಮ್ಮ ಕೃತಿಗಳ ಮೂರು ಪ್ರತಿಗಳನ್ನು ಸೆಪ್ಟೆಂಬರ್ 30ರೊಳಗೆಜಿ.ಎನ್.ರಂಗನಾಥ ರಾವ್ಕಾರ್ಯಾಧ್ಯಕ್ಷರುಶ್ರೀಮತಿ ಸರಳಾ ರಂಗನಾಥ ರಾವ್‌ ಸ್ಮಾರಕ ಪ್ರತಿಷ್ಠನನಂ.276, ‘ಸ್ನೇಹ‘, 3ನೇ ಮೈನ್‌ ರಸ್ತೆ, 8ನೇ ಬ್ಲಾಕ್‌ಕೋರಮಂಗಲಬೆಂಗಳೂರು-560095 ಈ ವಿಳಾಸಕ್ಕೆ ತಲುಪಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಯು ರೂ 10,000 ನಗದು ಮತ್ತು ಫಲ ತಾಬೂಲಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ ಎಂದು ಗೌರವಾಧ್ಯಕ್ಷರಾದ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಪ್ರಧಾನ ಕಾರ್ಯದಶಿ ತೀರ್ಥ ಜಿ.ಆರ್ ಆರ್ ತಿಳಿಸಿದ್ದಾರೆ..

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7372473151

Ghantepatrike kannada daily news Paper

Leave a Reply

error: Content is protected !!